ಕ್ರಿಕೆಟ್ ಪಂದ್ಯದ ವೇಳೆ ಯುವಕನ ಕೊಲೆ, ಆರು ಆರೋಪಿಗಳ ಬಂಧನ

ಕ್ರಿಕೆಟ್ ಪಂದ್ಯದ ವೇಳೆ ಉಂಟಾದ ಜಗಳದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕ್ರಿಕೆಟ್ ಪಂದ್ಯದ ವೇಳೆ  ಉಂಟಾದ ಜಗಳದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ  ಆರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು  ಬಂಧಿಸಿದ್ದಾರೆ.
ಶಿವಾಜಿ (30) ಪುನೀತ್ ( 23)  ವಿನೋದ್ (30)  ಭರತ್ ( 22) ಚೇತನ್ ( 23 ) ಮತ್ತು ಭಾಸ್ಕರ್ (23) ಬಂಧಿತ ಆರೋಪಿಗಳು. ಇವರೆಲ್ಲರೂ ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ನ ನಿವಾಸಿಯಾಗಿದ್ದಾರೆ.
ಕಮಲಾನಗರದ 22 ವರ್ಷದ  ಯುವಕ ಮಣಿಕಾಂತ್  ನನ್ನು ಕೊಲೆ ಮಾಡಿದ್ದರು.
ಗೆಳೆಯರ ಬಳಗ ಸ್ಕೆಟಿಂಗ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುವಾಗ ಮಣಿಕಾಂತ್ ಹಾಗೂ ಶಿವಾಜಿ ನಡುವೆ ಜಗಳ ನಡೆದಿತ್ತು. ನಂತರ   ಶಿವಾಜಿ ತನ್ನ ಗೆಳೆಯರೊಂದಿಗೆ ಜೆ, ಸಿ. ನಗರಕ್ಕೆ ಹೋಗಿ ಮಣಿಕಾಂತನನ್ನು ಹುಡುಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com