ಬೆಂಗಳೂರು: ಚಿನ್ನದಂಗಡಿಗೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ

ಮಾಗಡಿ ರಸ್ತೆಯ ಮಾಚೋಹಳ್ಳಿಯ ಚಿನ್ನಾಭರಣ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ...
ದರೋಡೆ ದೃಶ್ಯ
ದರೋಡೆ ದೃಶ್ಯ
ಬೆಂಗಳೂರು: ಮಾಗಡಿ ರಸ್ತೆಯ ಮಾಚೋಹಳ್ಳಿಯ ಚಿನ್ನಾಭರಣ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. 
ನಿನ್ನೆ ರಾತ್ರಿ 9ರ ಸುಮಾರಿನಲ್ಲಿ 6 ಮಂದಿ ಇದ್ದ ದರೋಡೆಕೋರರ ತಂಡ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಮಚ್ಚಿನೇಟಿನಿಂದ ಮಾಲೀಕ ಚಾನ್ ರಾಮ್ ಅವರ ಕೈ ಕತ್ತರಿಸಿ ಹೋಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಚಾನ್ ರಾಮ್ 9ರ ಸುಮಾರಿಗೆ ಅಂಗಡಿ ಬಾಗಿಲು ಮುಚ್ಚುವಾಗ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಮತ್ತು ಜರ್ಕಿನ್ ಧರಿಸಿದ್ದರು. ಅಂಗಡಿಯೊಳಗೆ ನುಗ್ಗಿದ ಅವರು ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಲೂಟಿ ಮಾಡಲು ಹೋದಾಗ ಕೂಗಿಕೊಂಡ ಚಾನ್ ರಾಮ್ ಕೈಗೆ ಮಚ್ಚಿನಿಂದ ಹೊಡೆದು ಬೆದರಿಸಿ ಚಿನ್ನಾಭರಣಗಳನ್ನು ಬ್ಯಾಗ್ ಗಳಿಗೆ ತುಂಬಿ ಕೊಳ್ಳ ತೊಡಗಿದ್ದಾಗ ಅಷ್ಟರಲ್ಲಿ ಸಿಬ್ಬಂದಿಯೊಬ್ಬ ಸಹಾಯಕ್ಕಾಗಿಿ ಕೂಗಿಕೊಂಡಾಗ ಅಕ್ಕಪಕ್ಕದವರು ಸಹಾಯಕ್ಕೆ ಬಂದಿದ್ದು ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. 
ಸಾರ್ವಜನಿಕರಿಂದ ಹೆದರಿದ್ದರಿಂದ ದರೋಡೆಕೋರರು ಚೀಲದಲ್ಲಿ ತುಂಬಿದ್ದ ಚಿನ್ನಾಭರಣಗಳನ್ನು ಕಾರಿನಲ್ಲಿಟ್ಟುಕೊಂಡು ಪರಾರಿಯಾಗಲು ಯತ್ನಿಸಿದಾಗ ಬೆನ್ನಟ್ಟಿದ ಸಾರ್ವಜನಿಕರು ಓರ್ವನನ್ನು ಹಿಡಿದುಕೊಂಡಿದ್ದು ಉಳಿದವರು ಪರಾರಿಯಾಗಿದ್ದಾರೆ. 
ಸಿಕ್ಕ ದರೋಡೆಕೋರನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಾದನಾಯಕನಹಳ್ಳಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com