ಇನ್ನು ಆಗಾಗ ಮನೆಗೆ ಬರುತ್ತಿದ್ದ ತೇಜ್ ರಾಜ್ ಟೀ ಕುಡಿದ ಬಳಿಕ ಹೊರಟುಹೋಗುತ್ತಿದ್ದನಂತೆ. ಸ್ಥಳೀಯ ಅಧಿಕಾರಿ ಮಂದುನಾಥ್ ಎಂಬುವವರ ವಿರುದ್ಧ ದೂರು ನೀಡಿದ್ದ ತೇಜ್ ರಾಜ್ ಶರ್ಮಾ ವರ್ಷಗಳಿಂದಲೂ ಲೋಕಾಯುಕ್ತ ಕಚೇರಿಗೆ ಅಲೆದಾಡುತ್ತಿದ್ದನಂತೆ. ಅಧಿಕಾರಿಗಳು ಕಮೀಷನ್ಗಾಗಿ ಇಲಾಖೆಗಳಿಗೆ 4-5 ಕೋಟಿ ರೂ. ನಷ್ಟ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ, ಕೈ ಕೆಲಸಗಾರರಿಗೆ, ರೇಷ್ಮೆ ರೈತರಿಗೆ, ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ ತೇಜರಾಜ್ ಆರೋಪಿಸಿದ್ದ.