10 ವರ್ಷಗಳ ಹಿಂದೆ ವಿಶ್ವನಾಥ್ ಹಾಗೂ ದಿವ್ಯಾ ವಿವಾಹವಾಗಿದ್ದು, ಈ ದಂಪತಿಗೆ ಸಂವಿತ್ ಎಂಬ ಏಕೈಕ ಪುತ್ರನಿದ್ದ. ಮೈಸೂರಿನ ನೇತಾಜಿ ನಗರದಲ್ಲಿ ಕುಟುಂಬದ ಜೊತೆಗೆ ವಾಸವಾಗಿದ್ದ ಅವರು, ಮೈಸೂರಿನ ಕೆಎಸ್ಆರ್'ಪಿ ಬೆಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ಸಂಚಿತ್'ಗೆ ಎರಡು ವರ್ಷದಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ರಮೇಣ ಆತನಿಗೆ ಮಾತನಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು. ಇತ್ತ ತಮ್ಮ ಪುತ್ರನಿಗೆ ಬೆಂಗಳೂರು, ಮೈಸೂರಿನಲ್ಲಿ ಹಲವು ತಜ್ಞ ವೈದ್ಯರಲ್ಲಿ ವಿಶ್ವನಾಥಅ ದಂಪತಿ ಚಿಕಿತ್ಸೆ ಕೊಡಿಸಿದ್ದರೂ, ದಿನ ಕಳೆದಂತೆ ಸಂವಿತ್ ಆರೋಗ್ಯ ವಿಷಮಯವಾಯಿತು. ಇದರಿಂದ ಅವರು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸರುಮಾಹಿತಿ ನೀಡಿದ್ದಾರೆ.