ಬಳಿಕ ಸ್ಪಷ್ಟನೆ ನೀಡಿದ ಅಮಿತ್ ಶಾ ಅವರು, ಹೆಗಡೆಯವರ ಹೇಳಿಕೆಯಲ್ಲಿ ಬಿಜೆಪಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಲಿತರ ಪರ ಕಾರ್ಯಕ್ರಮಗಳಾದ ನಾಗ್ಪುರದಲ್ಲಿನ ದೀಕ್ಷಾ ಭೂಮಿ, ಮುಂಬೈ, ನವದೆಹಲಿ ಹಾಗೂ ಲಂಡನ್ ನಲ್ಲಿ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಗಳನ್ನು ಪಟ್ಟಿ ಮಾಡಿದರು.