ಹೌದು ಕಳೆದ ಏಪ್ರಿಲ್ 13ರಂದು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಪಾಕಿಸ್ತಾನಕ್ಕೆ ತೆರಳಿ ಅದೇ ದಿನ ವಾಪಸ್ ಆಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಕಳೆದ ಏಪ್ರಿಲ್ 13ರಂದು ಮುಂಬೈನಿಂದ ಕರಾಚಿಗೆ ತೆರಳಿದ್ದರು. ಅಲ್ಲಿ ಒಂದಷ್ಟು ಕಾಲ ಕಳೆದು ಬಳಿಕ ಕರಾಚಿಯಿಂದ ಮುಂಬೈ ವಾಪಸ್ ಆಗಿದ್ದು, ಅದೇ ದಿನ ಮುಂಬೈನಿಂದ ಬೆಂಗಳೂರಿಗೆ ಇಬ್ಬರೂ ನಾಯಕರು ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ.