ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಮುಂಜಾನೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..
ಕೇಶವ ವಿಟ್ಟ ಅವರು 1984ರಲ್ಲಿ 'ಮುಂಗಾರು' ಪತ್ರಿಕೆಯ ಮೂಲಕ ಛಾಯಾಚಿತ್ರ ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು.
1996ರಲ್ಲಿ ಅವರು ಇಂಡಿಯನ್ ಎಕ್ಸ್ಪ್ರೆಸ್ ಬಳಗವನ್ನು ಸೇರಿಕೊಂಡು ಅಲ್ಲಿ ಹಲವು ವರ್ಷ ಕಾಲ ದುಡಿದರು. ಅನಂತರ ಹವ್ಯಾಸಿ ಸ್ವತಂತ್ರ ಛಾಯಾಚಿತ್ರ ಪತ್ರಕರ್ತರಾಗಿ ಅವರು ದ ಟೆಲಿಗ್ರಾಫ್, ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಗಳಿಗಾಗಿ ದುಡಿದರು.