ಪತ್ರಿಕಾ ಛಾಯಾಚಿತ್ರಕಾರ ಕೇಶವ ವಿಟ್ಲ ನಿಧನ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ.....
ಕೇಶವ ವಿಟ್ಲ
ಕೇಶವ ವಿಟ್ಲ
Updated on
ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಮುಂಜಾನೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. 
ಕೇಶವ ವಿಟ್ಟ ಅವರು 1984ರಲ್ಲಿ 'ಮುಂಗಾರು' ಪತ್ರಿಕೆಯ ಮೂಲಕ ಛಾಯಾಚಿತ್ರ ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. 
1996ರಲ್ಲಿ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗವನ್ನು ಸೇರಿಕೊಂಡು ಅಲ್ಲಿ ಹಲವು ವರ್ಷ ಕಾಲ ದುಡಿದರು. ಅನಂತರ ಹವ್ಯಾಸಿ ಸ್ವತಂತ್ರ ಛಾಯಾಚಿತ್ರ ಪತ್ರಕರ್ತರಾಗಿ ಅವರು ದ ಟೆಲಿಗ್ರಾಫ್, ಹಿಂದುಸ್ಥಾನ್‌ ಟೈಮ್ಸ್‌ ಪತ್ರಿಕೆಗಳಿಗಾಗಿ ದುಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com