ಲಾರಿ-ಬಸ್ ಡಿಕ್ಕಿ: 6 ಮುಂಬೈ ಪ್ರವಾಸಿಗರ ದುರ್ಮರಣ, 10 ಮಂದಿಗೆ ಗಾಯ
ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ರಾಜ್ಯದ ಪ್ರವಾಸಕ್ಕಾಗಿ ಬಂದಿದ್ದ ಮಹಾರಾಷ್ಟ್ರದ ಆರು ಮಂದಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಭದ್ರಾಪುರದಲ್ಲಿ...
ಲಾರಿ-ಬಸ್ ಡಿಕ್ಕಿ: 6 ಮುಂಬೈ ಪ್ರವಾಸಿಗರ ದುರ್ಮರಣ, 10 ಮಂದಿಗೆ ಗಾಯ
ಹುಬ್ಬಳ್ಳಿ: ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ರಾಜ್ಯದ ಪ್ರವಾಸಕ್ಕಾಗಿ ಬಂದಿದ್ದ ಮಹಾರಾಷ್ಟ್ರದ ಆರು ಮಂದಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಭದ್ರಾಪುರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮುಂಬೈನ ಫಾಟ್ಕೋಪರ್ ಮತ್ತು ದಾದರ್ ಮೂಲದ ವಿಶ್ವನಾಥ ಮ್ಹಾತ್ರೆ (76), ದಿನಕರ ಮ್ಹಾತ್ರೆ (74), ರಮೇಶ ಜಯಮಾಲ (70), ಸುಮೇದಾ ಜಮಖಂಡಿಕರ (65), ಸುಚಿತ್ರಾ ರೌಲ್ (61), ಲಾಹು ಕೆಲೋಸ್ಕರ್ (65) ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ.
ಹುಬ್ಬಳ್ಳಿಯಿಂದ ಹಂಪಿಗೆ ತೆರಳುವಾಗ ಬೆಳಗಿನ ಜಾವ 5.30ರ ಸುಮಾರಿಗೆ ಭದ್ರಾಪುರ ಬಳಿ ಎಡಭಾಗದಲ್ಲಿ ಲಾರಿಯೊಂದು ಕೆಟ್ಟು ನಿಂತಿತ್ತು. ಇದಕ್ಕೆ ಬಸ್ ಗುದ್ದುವುದನ್ನು ತಪ್ಪಿಸಲು ಚಾಲಕ ಬಲಭಾಗಕ್ಕೆ ತಿರುಗಿಸಿದ್ದಾನೆ. ಈ ವೇಳೆ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದು, ಬಸ್ ಪಲ್ಟಿಯಾಗಿ ಘಟನೆ ಸಂಭವಿಸಿದೆ.