ಸಂಸದರಾಗಿದ್ದಾಗ ರಾಜಧಾನಿ ದೆಹಲಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ನನ್ನ ಪತಿ ಯಾವಾಗಲೂ ತಾಳ್ಮೆ ಹಾಗೂ ಸಮಾಧಾನಕರ ವ್ಯಕ್ತಿಯಾಗಿದ್ದರಿಂದಾಗಿ ಯಾವುದೇ ಕೆಲಸವಾಗಬೇಕಿದ್ದರೂ, ಕಠಿಣವಾಗಿರಬೇಕೆಂದು ಸಲಹೆ ನೀಡಿದ್ದರು. ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದಾಗ ಕೂಡ ಅವರನ್ನು ಭೇಟಿ ಮಾಡಿದ್ದೆವು.