ಬಳಿಕ ಮಾತನಾಡಿದ ಸುಧಾಮೂರ್ತಿ ಅವರು, 'ನನಗೆ ಬಹಳ ಸಂಸವಾಗಿದೆ. ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದೆ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಬಹಳ ದೊಡ್ಡ ಗೌರವ. ಅರವತ್ತು ವರ್ಷಗಳ ಹಿಂದೆ ಅಂದರೆ ನಾನು 8 ವರ್ಷದವಳಿದ್ದಾಗ ದಸರಾ ನೋಡಿದ್ದೆ. ಈಗ 68ನೇ ವಯಸ್ಸಿಗೆ ದಸರಾ ನೋಡಲು ಉತ್ಸುಕಳಾಗಿದ್ದೇನೆ. ರಾಜ್ಯ ಸರ್ಕಾರ ನನಗೆ ಆಹ್ವಾನ ನೀಡಿರುವುದು ತುಂಬಾ ಸಂತೋಷವಾಗಿದೆ. 10 ದಿನವೂ ಅಲ್ಲೇ ಇರಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು.