ಈ ಕುರಿತು ಮಾತನಾಡಿದ ಸುಧಾಮೂರ್ತಿಯವರು, ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅದರ ಜೊತೆ ಕೈ ಜೋಡಿಸಬೇಕು. ಹಣಕ್ಕಿಂತ ಹೆಚ್ಚು ಉತ್ತಮ ಯೋಜನೆ ಇರಬೇಕು. ಸರ್ಕಾರ ಈ ಕಾರ್ಯಕ್ರಮವು ಸಂತೋಷವನ್ನುಂಟು ಮಾಡಿದೆ. ರೂ.22 ಕೋಟಿ ವೆಚ್ಚದಲ್ಲಿ ಸೈಬರ್ ಲ್ಯಾಬ್ ನಿರ್ಮಾಣ ಮಾಡಿಕೊಡಲಾಗುತ್ತಿದೆ. 5 ವರ್ಷ ಅದನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಈಗಾಗಲೇ ರೂ.1 ಕೋಟಿ ವೆಚ್ಚದಲ್ಲಿ ಕೆಲಸ ಪ್ರಾಂರಭಿಸಲಾಗಿದೆ ಎಂದು ಹೇಳಿದರು.