ಯುವಕನನ್ನು ನೋಡಿ ಅಯ್ಯೋ ಎನಿಸಿತು. ಹೀಗಾಗಿ ಡ್ರಾಪ್ ಮಾಡಲು ಒಪ್ಪಿಕೊಂಡೆ. ನಾಗಾರ ಸಿಗ್ನಲ್ ಬಳಿ ಬರುತ್ತಿದ್ದಂತೆಯೇ ವೀರಪ್ಪನಪಾಳ್ಯ ಜಂಕ್ಷನ್ ಬಳಿ ಇಳಿಯುವುದಾಗಿ ತಿಳಿಸಿದ. ವೀರಪ್ಪನಪಾಳ್ಯ ಬಳಿ ಹೋಗುತ್ತಿದ್ದಂತೆಯೇ ಯಾರೋ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆಂದು ಹೇಳಿದ. ಈ ವೇಳೆ ಆ ರೀತಿ ಏನೂ ಆಗಿಲ್ಲ ಎಂದು ಹೇಳಿದ್ದೆ. ಆದರೂ ಆತ ಅದೇ ರೀತಿ ಹೇಳಿದ. ಬಳಿಕ ಕಾರು ನಿಲ್ಲಿಸಿ ಏನಾಯಿತು ಎಂದು ನೋಡಲು ಇಳಿದೆ. ಈ ವೇಳೆ ದುಷ್ಕರ್ಮಿ ಕಾರನ್ನು ಚಲಾಯಿಸಿಕೊಂಡು ಹೊರಟುಹೋದ ಎಂದು ದೂರಿನಲ್ಲಿ ವೇಲು ಅವರು ಹೇಳಿದ್ದಾರೆ.