ಬಸ್ ನಿಲ್ದಾಣದಿಂದ ಪ್ರತೀನಿತ್ಯ ಊಟಿಗೆ ಪ್ರಯಾಣಿಸುತ್ತೇನೆ. ಪ್ರತೀನಿತ್ಯ ನಿಲ್ದಾಣದಲ್ಲಿರುವ ಶೌಚಾಲಯವನ್ನು ಬಳಕೆ ಮಾಡುತ್ತೇನೆ. ಮೂತ್ರವಿಸರ್ಜನೆಗೆ ರೂ.2 ಪಡೆಯುತ್ತಾರೆ. ಆದರೆ, ಮೂತ್ರ ವಿಸರ್ಜನೆಗೆ ಹಣ ನೀಡಬೇಕಿಲ್ಲ. ಇದನ್ನು ನಾವು ಪ್ರಶ್ನಿಸಿದರೆ, ಗುತ್ತಿಗೆದಾರರು ನಮ್ಮೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ. ಹಣ ನೀಡದೆಯೇ ಶೌಚಾಲಯದೊಳಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಪ್ರತೀನಿತ್ಯ ಜನರ ಬಳಿ ಸುಲಿಗೆ ಮಾಡುತ್ತಾರೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಹಾಗೂ ಜನರಿಗಂತೂ ಇದು ಭಾರಿ ಸಂಕಷ್ಟವನ್ನು ನೀಡಲಿದೆ ಎಂದು ಪ್ರೇಮ್ ಕುಮಾರ್ ಅಂಬುವವರು ಹೇಳಿದ್ದಾರೆ.