ಭೂಕುಸಿತ ಸಂಭವಿಸಿದ ಪರಿಣಾಮ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದ ಕರಿಮೆಣಸು ಹಾಗೂ ಏಲಕ್ಕಿ ಬೆಳೆಗಳು ನಾಶಗೊಂಡಿವೆ. ಬೆಳೆ ನಾಶ ಸರಿಪಡಿಸಲು ಕನಿಷ್ಟ ಮೂರು ತಿಂಗಳಾದರೂ ಬೇಕು. ನಷ್ಟಗಳನ್ನು ಲೆಕ್ಕ ಹಾಕಲು ಮಂಡಳಿ ಸಮೀಕ್ಷೆ ನಡೆಸುತ್ತಿದೆ ಎಂದು ಮಸಾಲೆ ಪದಾರ್ಥದ ಮಂಡಳಿ ನಿರ್ದೇಶಕ ಪಿ.ಎಂ.ಸುರೇಶ್ ಕುಮಾರ್ ಅವರು ಹೇಳಇದ್ದಾರೆ.