ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಅಗ್ನಿಶಾಮಕ, ತುರ್ತು ಸೇವೆ ಇಲಾಖೆ ಎಡಿಜಿಪಿ ಸುನೀಲ್ ಅಗಲ್ ವಾರ್ ಅವರು, ಬೆಂಗಳೂರಿನ ಜಾಲಹಳ್ಳಿಯ ರಾಕ್'ಲೈನ್ ಮಾಲ್, ಯಶವಂತಪುರದ ವೈಷ್ಣವಿ, ವೇಗಾ ಸಿಟಿ ಮಾಲ್, ಹುಳಿಮಾವು ರಾಯಲ್ ಮೀನಾಕ್ಷಿ ಮಾಲ್, ರಾಜಾಜಿನಗರದ ಗೋಲ್ಡನ್ ಹೈಟ್ಸ್, ಸರ್ಜಾಪುರದ ಸೆಂಟ್ರಲ್ ಮಾಲ್, ಬ್ರಾಂಡ್ ಫ್ಯಾಕ್ಟರಿ, ಹಲಸೂರಿನ ಲಿಡೋಮಾಲ್, ಡಿಮಾರ್ಕೆಟ್ ಸಿಟಿಯಲ್ಲಿ ದಾಳಿ ನಡೆಸಲಾಗಿಯಿತು. ಅವಘಡ ಸಂಭವಿಸಿದ ವೇಳೆ ಬಳಸುವ ಸ್ಥಳವನ್ನು ವಾಹನಗಳ ಪಾರ್ಕಿಂಗ್, ಸಣ್ಣ ಮಳಿಗೆ, ಸರಕು ಸಾಗಣೆ ಕೊಠಡಿಯನ್ನಾಗಿ ಮಾಡಿಕೊಂಡಿರುವುದು ಕಂಡುಬಂದಿದೆ.