ಇನ್ನು ಗಿರೀಶ್ ಕಾರ್ನಾಡ್ ಅವರಿಗೆ 'ಕಾಕಾ', ನಿಡುಮಾಮಿಡಿ ಸ್ವಾಮಿಜಿಗೆ 'ಸ್ವಾಮಿ' ಎಂಬ ಕೋರ್ಡ್ ವರ್ಡ್ ನೀಡಲಾಗಿತ್ತು. ಗೌರಿ ಲಂಕೇಶ್ಗೆ 'ಅಮ್ಮ', ಅವರ ಮನೆಗೆ 'ಗೋಶಾಲೆ' ಎಂದು ಕೋಡ್ವರ್ಡ್ ಇಟ್ಟುಕೊಳ್ಳಲಾಗಿತ್ತು. ಡೈರಿಯಲ್ಲಿ ಮರಾಠಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದ ಕಾಳೆ ನಾಲ್ವರು ವಿಚಾರವಾದಿಗಳ ಹತ್ಯೆಗೆ ನಾಲ್ವರು ಶೂಟರ್ ಗಳನ್ನು ಕೂಡ ಫಿಕ್ಸ್ ಮಾಡಿದ್ದ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕಾಳೆ ಕೈಬರಹವನ್ನು ಹೋಲಿಕೆ ಮಾಡಲಾಗಿದ್ದು, ಡೈರಿಯ ಬರಹಕ್ಕೆ ಅದು ತಾಳೆಯಾಗಿದೆ. ಹತ್ಯೆಗೆ ವಿಚಾರವಾದಿಗಳು ಅಷ್ಟೇ ಅಲ್ಲದೆ, ಕುಟುಂಬಸ್ಥರು , ಎಸ್ ಐಟಿ ತನಿಖಾಧಿಕಾರಿಗಳ ಹಿಟ್ ಲಿಸ್ಟ್ ಅನ್ನು ಆರೋಪಿಗಳು ಸಿದ್ದಪಡಿಸಿದ್ದರು ಎನ್ನಲಾಗಿದೆ.