ಖ್ಯಾತ ಪತ್ರಕರ್ತೆ ಮತ್ತು ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ ವರ್ಷ ಕಳೆದಿರುವ ಹಿನ್ನಲೆಯಲ್ಲಿ ಅವರ ಸಾವಿನ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆಗೆ ಮರು ಜನ್ಮ ನೀಡಲಾಗಿದೆ. ಹೊಸ ಅವತಾರದಲ್ಲಿ ಗೌರಿ ಲಂಕೇಶ್ ಪತ್ರಿಕೆ ಇಂದು ಲೋಕಾರ್ಪಣೆಯಾಗಲಿದೆ. ಅಂತೆಯೇ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಅವರ ಸಿದ್ಧಾಂತ ಮತ್ತು ಪರಂಪರೆಯನ್ನು ಮುಂದುವರೆಸಲು ಪತ್ರಿಕೆ ನಿರ್ಧರಿಸಿದೆ. ಅವರ ಆಪ್ತ ಸ್ನೇಹಿತರು, ಸಹೋದ್ಯೋಗಿಗಳು ಒಗ್ಗೂಡಿ ಪತ್ರಿಕೆಯನ್ನು ಹೊರ ತಂದಿದ್ದು, ಪತ್ರಿಕೆಗೆ ನ್ಯಾಯಪಥ ಎಂಬ ಶೀರ್ಷಿಕೆ ಇಡಲಾಗಿದೆ. ಅಂತೆಯೇ ಪತ್ರಿಕೆಯಲ್ಲಿ 'ನನ್ನ ಧನಿ ಅಡಗಿಸಲು ಸಾಧ್ಯವಿಲ್ಲ' ಎಂಬ ಬರಹದೊಂದಿಗೆ ಗೌರಿ ಹಂತಕರ ವಿರುದ್ಧವೂ ಕಿಡಿಕಾರಲಾಗಿದೆ.