ಪ್ರಕರಣದಲ್ಲಿ ನನ್ನದೇನೂ ಪಾತ್ರವೇ ಇಲ್ಲದಿದ್ದರೂ, ಪೊಲೀಸರು ನನಗೆ ಹಿಂಸೆ ನೀಡಿದ್ದರು. ಅವರು ಅಂದುಕೊಂಡಿದ್ದನ್ನು ನಾನು ಹೇಳುವಂತೆ ಮಾಡಲು ಹಿಂಸೆ ನೀಡುತ್ತಿದ್ದರು. ಪ್ರತೀ ಬಾರಿ ನನಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು. ಮೂರು ದಿನಗಳ ಕಾಲ ಊಟ, ನೀರನ್ನು ನೀಡಿರಲಿಲ್ಲ. ನಾನು ಸಕ್ಕರೆ ಕಾಯಿಲೆಯ ರೋಗಿಯಾಗಿದ್ದು, ನನಗೆ ಔಷಧಗಳನ್ನೂ ನೀಡಿರಲಿಲ್ಲ. ಪೊಲೀಸರು ನೀಡಿದ್ದ ಹಿಂಸೆಗೆ ನನ್ನ ಕೈ,ಕಾಯು ಸ್ವಾಧೀನವೇ ಇಲ್ಲದಂತಾಗಿತ್ತು.