ಬೆಂಗಳೂರು: ಆಟೋ ಚಾಲಕನಿಂದ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶು ರಕ್ಷಣೆ

ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ನವಜಾತ ಶಿಶು ರಕ್ಷಿಸಿದ ಸುನೀಲ್ ಕುಮಾರ್
ನವಜಾತ ಶಿಶು ರಕ್ಷಿಸಿದ ಸುನೀಲ್ ಕುಮಾರ್
Updated on
ಬೆಂಗಳೂರು:  ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಂದಿನಿ ಲೇಔಟ್‌ನ ಸುನೀಲ್‌ ಕುಮಾರ್‌ ಮಗುವನ್ನು ರಕ್ಷಿಸಿದ ಆಟೋ ಚಾಲಕ. ಸುನೀಲ್‌ ಕುಮಾರ್‌ ಶುಕ್ರವಾರ ಬೆಳಗ್ಗೆ 8.15 ಕ್ಕೆ ಸುಮಾರಿಗೆ ಪೀಣ್ಯದ ಇಎಸ್‌ಐ ಆಸ್ಪತ್ರೆ ಬಳಿ ಆಟೋ ಚಾಲನೆ ಮಾಡಿಕೊಂಡು ಹೋಗುವಾಗ ಮೂತ್ರ ವಿಸರ್ಜಿಸಲೆಂದು ಆಟೋ ನಿಲ್ಲಿಸಿದ್ದಾರೆ.
ಈ ವೇಳೆ ಕಸದ ತೊಟ್ಟಿ ಬಳಿ ಮಗುವಿನ ಅಳು ಕೇಳಿಸಿದೆ. ಹತ್ತಿರ ಹೋಗಿ ನೋಡಿದಾಗ ಬಟ್ಟೆಯಲ್ಲಿ ನವಜಾತ ಗಂಡು ಮಗು ಕಂಡುಬಂದಿದೆ. ಕೂಡಲೇ ಮಗುವನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಮಗು ಆರೋಗ್ಯವಾಗಿತ್ತು.
ನಂತರ ಆರ್‌ಎಂಸಿ ಯಾರ್ಡ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಆಸ್ಪತ್ರೆಗೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ 
ನವಜಾತ ಶಿಶುವನ್ನು ಸಾಕಲು ಹಲವರು ಮುಂದೆ ಬಂದಿದ್ದಾರೆ ಆದರೆ ಶಿವಕುಮಾರ್ ಅವರು ಮಗುವನ್ನು ಯಾರಿಗೂ ನೀಡದೇ ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ್ದಾರೆ, ಕಾನೂನು ಪ್ರಕ್ರಿಯೆಗಳ ಪಾಲನೆ ಬಳಿಕ ಮಗು ದತ್ತು ಪ್ರಕ್ರಿಯೆಗೆ ಅವಕಾಶವಿದೆ ಎಂದು ಹೇಳಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com