ಹೌದು.. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ ಅವರ ಸಾವಿಗೆ ರೋಚಕ ಟ್ವಿಸ್ಟ್ ದೊರೆಯುತ್ತಿದ್ದು, ಸಿದ್ಧಾರ್ಥ್ ಅವರ ಸಾವಿಗೆ ಮುಂಬೈ ಮೂಲದ ಫೈನಾನ್ಸ್ ಕಂಪನಿಯ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ. ಕಾರಣಾಂತರಗಳಿಂದ ಈ ಫೈನಾನ್ಸ್ ಸಂಸ್ಛೆಯಿಂದ ಸಿದ್ಧಾರ್ಥ್ ಸಾಲ ಪಡೆದಿದ್ದು, ಇದನ್ನು ತೀರಿಸಲಾಗದೇ ಮತ್ತು ಆ ಸಂಸ್ಥೆಯ ಎಜೆಂಟರುಗಳ ಕಿರುಕುಳದಿಂದ ಬೇಸತ್ತ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.