ಮೂಲಗಳ ಪ್ರಕಾರ ನಾಪತ್ತೆಯಾಗುವ ದಿನ ಸಿದ್ಧಾರ್ಥ್ ಸಕಲೇಶಪುರಕ್ಕೆ ತೆರಳುವುದಾಗಿ ಹೇಳಿ ಡ್ರೈವರ್ ಜೊತೆ ಕಾರಿನಲ್ಲಿ ತೆರಳಿದ್ದರಂತೆ. ಅಂದು ಸಂಜೆ ಸುಮಾರು 5.26ರ ಸಮಯದಲ್ಲಿ ಸಿದ್ಧಾರ್ಥ ಅವರ ಕಾರು ಟೋಲ್ಗೇಟ್ ದಾಟಿ ಮಂಗಳೂರಿನತ್ತ ಸಾಗಿತ್ತು. ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಸಿದ್ಧಾರ್ಥ ಕಾರು ಹಾದು ಹೋದ ಸಮಯಕ್ಕೂ ಮಂಗಳೂರಿನಲ್ಲಿ ನಾಪತ್ತೆಯಾದ ಸಮಯದ ಮಧ್ಯೆ ಸಾಕಷ್ಟು ವ್ಯತ್ಯಾಸ ಇರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.