ಏರೋ ಇಂಡಿಯಾ ವಿಮಾನ ದುರಂತಕ್ಕೆ ಟ್ವಿಸ್ಟ್; ವಿಮಾನದಲ್ಲಿದ್ದದ್ದು 4 ಪೈಲಟ್ ಗಳು?, ಮತ್ತೋರ್ವ ಗಾಯಾಳು ಪೈಲಟ್ ಪತ್ತೆ

ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನಗಳ ಅಪಘಾತ
ವಿಮಾನಗಳ ಅಪಘಾತ
Updated on
ಬೆಂಗಳೂರು: ಬೆಂಗಳೂರು ಏರೋ ಇಂಡಿಯಾ 2019ಗಾಗಿ ತಾಲೀಮು ನಡೆಸುತ್ತಿದ್ದ ವೇಳೆ ಉಂಟಾಗಿದ್ದ ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿಮಾನಗಳಲ್ಲಿದ್ದದ್ದು ಮೂವರು ಪೈಲಟ್ ಗಳಲ್ಲ.. ಬದಲಿಗೆ 4 ಮಂದಿ ಪೈಲಟ್ ಗಳು ಎನ್ನಲಾಗಿದೆ. ಈ ಪೈಕಿ ಇಂದು ಮುಂಜಾನೆ ಮೂರನೇ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ವಾಯುನೆಲೆಯಲ್ಲಿ ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್​ ಲಘು ವಿಮಾನ ಡಿಕ್ಕಿಯಲ್ಲಿ ಕಣ್ಮರೆಯಾಗಿದ್ದ ಮತ್ತೊಬ್ಬ ಪೈಲಟ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಾಲೀಮಿನಲ್ಲಿ ತೊಡಗಿದ್ದ ಎರಡು ಸೂರ್ಯ ಕಿರಣ ಲಘುವಿಮಾನ ಡಿಕ್ಕಿ ಹೊಡೆ ಪರಿಣಾಮ ಓರ್ವ ಪೈಲಟ್​ ಸಾವನ್ನಪ್ಪಿದ್ದರು. ಇನ್ನು ಎರಡು ವಿಮಾನದಲ್ಲಿದ್ದ ಇನ್ನುಳಿದ ಇಬ್ಬರು ಪೈಲಟ್​ ಕೆಳಗೆ ಹಾರಿದ್ದರು. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಎರಡು ವಿಮಾನಗಳಲ್ಲಿ ಒಟ್ಟು ನಾಲ್ವರು ಪೈಲಟ್​ ಗಳು ಇದ್ದರು ಎನ್ನಲಾಗಿದೆ. ಈ ಪೈಕಿ ಇಬ್ಬರು ಪೈಲಟ್​ ಗಳು ಸಿಕ್ಕಿದ್ದು, ಇಂದು ಮುಂಜಾನೆ ವಿಮಾನದಿಂದ ಜಂಪ್​ ಮಾಡಿದ್ದ 2 IC ವಿಂಗ್ ಕಮಾಂಡರ್ ವಿಜಯ್​ ಶೆಲ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 
ಆದರೆ ಈ ಬಗ್ಗೆ ವಾಯು ಸೇನೆ ಹಾಗೂ ಏರೋ ಇಂಡಿಯಾ ಆಯೋಜಕರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಏರ್ಫೋಸ್​ ಹಿಂಭಾಗದ ಗಂಟಿಗಾನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಪತ್ತೆಯಾದ ಸಂದರ್ಭದಲ್ಲಿ ಶೆಲ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕಮಾಂಡರ್ ವಿಜಯ್​ ಶೆಲ್ಕೆ ಜೊತೆಗೆ ಸ್ಕ್ವಾಡ್ರನ್​ ಲೀಡರ್ ತೇಜೇಶ್ವರ್ ಸಿಂಗ್​​ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಎಫ್​ಎಸ್​ಎಲ್​​ ಟೀಂನಿಂದ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಬ್ಲ್ಯಾಕ್​ ಬಾಕ್ಸ್​ನಲ್ಲಿ ಪೈಲಟ್-ಎಟಿಸಿ ಸಂಭಾಷಣೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com