ಬೆಂಗಳೂರು: ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ದೇಶದಲ್ಲಿ ಆಕ್ರೋಶ ಭುಗಿಲೆಳುತ್ತಿದ್ದು ಬೆಂಗಳೂರಿನ ಇಂದಿರಾನಗರದಲ್ಲಿ ಕರಾಚಿ ಬೇಕರಿ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿದ್ದು ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಕರಾಚಿ ಹೆಸರಿನ ಬೋರ್ಡ್ ಗೆ ಬ್ಯಾನರ್ ನಿಂದ ಮುಚ್ಚಲಾಗಿದೆ. ಕಳೆದ ರಾತ್ರಿ ಗುಪೊಂದು ಬೇಕರಿ ಮುಂದೆ ಪ್ರತಿಭಟನೆ ನಡೆಸಿತ್ತು. ಇದರಿಂದ ಗಾಬರಿಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕರಾಚಿ ಬೇಕರಿ ಪಾಕಿಸ್ತಾನ ಮೂಲದ್ದು ಇಲ್ಲಿ ವ್ಯಾಪಾರ ನಡೆಸಬಾರದು ಎಂದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ರೀತಿಯಲ್ಲಿ ಬೇಕರಿ ಹಾನಿ ಮಾಡಿರಲಿಲ್ಲ. ಒಟ್ಟಿನಲ್ಲಿ 40 ಭಾರತೀಯ ಯೋಧರ ಸಾವು ದೇಶದ ಯುವಜನತೆಯಲ್ಲಿ ಪಾಕ್ ವಿರುದ್ಧ ಭುಗಿಲೆಳುವಂತೆ ಮಾಡಿದೆ.