ಮೈಸೂರು: ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದು ಕೃಷ್ಣ ದಂಪತಿಗಳು ಸಾವನ್ನಪ್ಪಿದ್ದಾರೆ..ಉತ್ತರ ಪ್ರದೇಶದ ಲಖನೌ ಸಮೀಪ ಭಾನುವಾರ ನಡೆದಿದ್ದ ಸಂಭವಿಸಿದ್ದ ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಅವರ ಪತ್ನಿ ಇಂದ್ರಾಣಿ ಗಂಭೀರವಾಗಿ ಗಾಯಗೊಂಡಿದ್ದರು..ಸೋಮವಾರ ಚಿಕಿತ್ಸೆ ಫಲಿಸದೆ ಇಂದ್ರಾಣಿ ಅಸುನೀಗಿದ್ದರೆ ಚೇತರಿಕೆ ಕಾಣುತ್ತಿದ್ದ ಮುದ್ದುಕೃಷ್ಣ ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತವಾಗಿ ಅಸುನೀಗಿದ್ದಾರೆ..ವಿಪರ್ಯಾಸವೆಂದರೆ ಇಂದು ಇಂದ್ರಾಣಿಯವರ ಜನ್ಮದಿನವಾಗಿದ್ದು ಇಂದೇ ದಂಪತಿಳು ಸಾವಿಗೀಡಾಗಿದ್ದಾರೆ..ಮೃತರ ಪಾರ್ಥಿವ ಶರೀರವನ್ನು ತರಲು ರಂಗಕರ್ಮಿ ಜಯರಾಮ ಪಾತೀಲ್ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಮಾಹಿತಿ ಲಭ್ಯಆಗಿದೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos