ದಾವಣಗೆರೆ: ಮದುವೆಯಾದ 11ನೇ ದಿನವೇ ನವವಧು ನೇಣಿಗೆ ಶರಣು

ಮದುವೆಯಾಗಿ ಕೇವಲ 11 ದಿನಕ್ಕೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ದಾವಣಗೆರೆ: ಮದುವೆಯಾಗಿ ಕೇವಲ 11 ದಿನಕ್ಕೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಭಾನುವಾರ ದಾವಣಗೆರೆ ಕೆಟಿಜೆ ನಗರದಲ್ಲಿ ನವವಿವಾಹಿತೆಯಾದ ಶಿಲ್ಪಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಕೆ ಚಿತ್ರದುರ್ಗದ ಕೋಣುರು ಗ್ರಾಮದವರಾಗಿದ್ದು ಇದೇ ಗ್ರಾಮದ ಮಂಜು ಎಂಬುವವರೊಡನೆ ಹನ್ನೊಂದು ದಿನಗಳ ಹಿಂದೆ ಮದುವೆಯಾಗಿದ್ದರು. 
ಆತ್ಮಹತ್ಯೆಗೆ ಶರನಾದ ವಧುವಿನ ಕೈಮೇಲೆ ನಾಲ್ವರ ಹೆಸರು ಬರೆದುಕೊಂಡಿರುವುದು ಪತ್ತೆಯಾಗಿದೆ. ಇದರ ಹಿಂದೆಯೇ ಹಲವು ಅನುಮಾನಗಳು ಮೂಡಿವೆ.
ಆಕೆ ತನ್ನ ಕೈಮೇಲೆ ಪತಿ ಮಂಜು, ಅವರ ಸಂಬಂಧಿಗಳಾದ ಕಲ್ಲೇಶ್, ಬಸಪ್ಪ ಹಾಗೂ ಸಂತೋಷ್  ಎಂಬುವವರ ಹೆಸರು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಶಿಲ್ಪಾ ಹಾಗೂ ಮಂಜು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು ಅಂತರ್ಜಾತಿ ವಿವಾಹವಾಗಿರುವ ಕಾರಣ ತಮ್ಮ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.
ಕೆಟಿಜೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com