ಬಾಲಕಿ ಮದುವೆಯಾಗುವುದನ್ನು ರಕ್ಷಿಸಲು ವಾಡಗೆರ ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ನಿರ್ದೇಶಕ ರಘುವೀರ್ ಸಿಂಗ್ ರಾಥೋಡ್ ಸ್ಥಳಕ್ಕೆ ತೆರಳಿದ್ದರು. ಆದರೆ ಅಧಿಕಾರಿಗಳ ತಂಡಕ್ಕೆ ಎರಡು ದಿನ ಹುಡುಕಾಡಿದರೂ ಬಾಲಕಿ ಪತ್ತೆಯಾಗಲಿಲ್ಲ. ಇದನ್ನು ತಿಳಿದ ಗ್ರಾಮಸ್ಥರಲ್ಲಿ ಯಾರೋ, ಬಾಲಕಿಯನ್ನು ಯಾದಗಿರಿ ತಾಲ್ಲೂಕಿನ ಕೊವ್ಲೂರು ಗ್ರಾಮದ ಆಕೆಯ ಮನೆಯಲ್ಲಿ ಬಂಧಿಸಿಡಲಾಗಿದೆ ಎಂದು ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದರು.