ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪತ್ನಿಯ ಕಿರಿಕುಳ ತಡೆಯಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
Updated on
ಬೆಂಗಳೂರು: ಪತ್ನಿಯ ಕಿರಿಕುಳ ತಡೆಯಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಮಂಜುನಾಥ ನಗರದ ನಿವಾಸಿ, ಚಾಲಕ ಶ್ರೀನಿವಾಸ್ ಎಸ್ ಮೃತಪಟ್ಟ ದುರ್ದೈವಿಯಾಗಿದ್ದು, ಮೃತಪಟ್ಟ ಹಲವು ದಿನಗಳ ಬಳಿಕ ಆತನ ಪಾರ್ಥಿವ ಶರೀರ ಪತ್ತೆಯಾಗಿದೆ. 
ಚಾಲಕ ಬರೆದಿಟ್ಟಿದ್ದ ಪತ್ರದ ಆಧಾರದಲ್ಲಿ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಿಳೆ ಹಾಗೂ ಆಕೆಯ ತವರುಮನೆಯವರ ವಿರುದ್ಧ ಆತ್ಮಹೆತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣ ದಾಖಲಿಸಿದ್ದಾರೆ. ಮೃತ ಶ್ರೀನಿವಾಸ್ ಅವರ ಸಹೋದರ ರವೀಶ್ವರ.ಎಸ್ ನೀಡಿರುವ ಮಾಹಿತಿಯ ಪ್ರಕಾರ ಶ್ರೀನಿವಾಸ್ ಹಾಗೂ ಸುಮಾ ಅವರೊಟ್ಟಿಗೇ ಇದ್ದರು. ಶ್ರೀನಿವಾಸ್ ರಾತ್ರಿ ಮನೆಗೆ ತಡವಾಗಿ ಬರುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಆಗಾಗ್ಗೇ ಕಲಹ ಉಂಟಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಸುಮಾ ತವರು ಮನೆಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ನಂತರ ಸುಮಾ ಹಾಗೂ ಅವರ ತವರುಮನೆಯ ಸದಸ್ಯರು ಧರ್ಮಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಶ್ರೀನಿವಾಸ್ ಅವರೊಂದಿಗೆ ಹೋಗುವುದಕ್ಕೆ ನಿರಾಕರಿಸಿದ್ದಾರೆ. ಈ ಸಂಬಂಧ ಇತ್ತೀಚೆಗಷ್ಟೇ ಕಲಹ ಉಂಟಾಗಿತ್ತು. 
ಶ್ರೀನಿವಾಸ್ ರಾತ್ರಿ ಮನೆಗೆ ಬರುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಅಕ್ರಮ ಸಂಬಂಧವಿದೆ ಎಂದು ಪತ್ನಿ ಸುಮಾ ಅನುಮಾನ ಹೊಂದಿದ್ದಳು ಎಂದು ಮೃತನ ಸಹೋದರ ರವೀಶ್ವರ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com