ಇಂದು ತಡರಾತ್ರಿ ತಲಕಾವೇರಿ ತೀರ್ಥೋದ್ಭವ

ಕಾವೇರಿ ನದಿಯ ಉಗಮ ಸ್ಥಳ ಕೊಡಗಿನ ತಲಾ ಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವ ಘಟಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಳ ಕೊಡಗಿನ ತಲಾ ಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವ ಘಟಿಸಲಿದೆ.

ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಅ.18 ರಂದು ತೀರ್ಥೋದ್ಭವ ನಡೆಯಲಿದ್ದು, ಈ ವಾರ್ಷಿಕ ಕಾರ್ಯಕ್ರಮಕ್ಕೆ ಕೊಡಗು ಸಜ್ಜಾಗಿದೆ. ಈ ಕುರಿತಂತೆ ಭಾಗಮಂಡಲದ ತಲಕಾವೇರಿ ದೇವಸ್ಥಾನದ ತಟದಲ್ಲಿ ಬೆಳಗ್ಗೆ 12.59 ಕ್ಕೆ ಸರಿಯಾಗಿ ತೀರ್ಥೋದ್ಭವವಾಗಲಿದೆ ಎಂದು ದೇವಸ್ಥಾನದ ಆಡಳಿತ  ಸಮಿತಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ದೇಗುಲದ ಆಡಳಿತ ಮಂಡಳಿ ಸದಸ್ಯ ಕಾವೇರಪ್ಪ ಅವರು, 'ಈಗಾಗಲೇ ರಾಜ್ಯ ಮತ್ತು ಹೊರರಾಜ್ಯಗಳ ಸಾವಿರಾರು ಭಕ್ತರು ತಲಾ ಕಾವೇರಿಯತ್ತ ಧಾವಿಸಿದ್ದಾರೆ. ತೀರ್ಥೋದ್ಭವಕ್ಕೆ ಆಗಮಿಸಿವ ಭಕ್ತಾದಿಗಳಿಗೆ ವಿರಾಜಪೇಟೆಯಿಂದ ತಲಕಾವೇರಿ. ವಿರಾಜಪೇಟೆ-ಕಾಡನೂರ್ -ಕೊಡಂಗ -ಎಡಪಾಲ-ನಾಪೊಕ್ಲು-ನೀಲಾಜಿ-ಬಲ್ಲಮಾವತಿ-ಅಯ್ಯಂಗೇರಿ-ಭಾಗಮಂಡಲ ರಸ್ತೆಯಾಗಿ ತಲಕಾವೇರಿ ಪ್ರವೇಶಿಸಬಹುದೆಂದು' ತಿಳಿಸಿದ್ದಾರೆ.

ಈ ವಾರ್ಷಿಕ ಕಾರ್ಯಕ್ರಮಕ್ಕೆ ಕೊಡಗು ಸಜ್ಜಾಗಿದ್ದು, ಎಲ್ಲೆಡೆ ದಾರಿ ದೀಪಗಳು,ಎಲ್ಇಡಿ ಬಲ್ಬ್​ಗಳನ್ನು ಅಳವಡಿಸಲಾಗಿದೆ. ತೀರ್ಥೊದ್ಭವದ ನಂತರ ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com