ಬೆಂಗಳೂರು: 43 ವರ್ಷದ ಮುಂಬೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರು ಬಾಣಸವಾಡಿಯ ತನ್ನ ಮನೆಯಲ್ಲಿ ಕುಳಿತಿರುವ ಭಂಗಿಯಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಮೃತನನ್ನು ಕೃಷ್ಣ ಶ್ರೀರಾಮ್ ಎಂದು ಗುರುತಿಸಲಾಗಿದ್ದು ಈತ ಬರಹಗಾರನಾಗಿದ್ದರು. ಕಳೆದ ಒಂದು ವರ್ಷದಿಂದ ಬೆಂಗಳುರಿನಲ್ಲಿ ನೆಲೆಸಿದ್ದ ಇವರ ದೇಹವನ್ನು ಇರುವೆಗಳು ತಿಂದಿವೆ, ಅಲ್ಲದೆ ಕಳೆದ ಕೆಲ ದಿನಗಳಿಂದ ಮನೆ ಸ್ವಚ್ಚವಾಗಿಸಿಲ್ಲ ಎಂದು ಪೋಲೀಸರು ಹೇಳೀದ್ದಾರೆ. ಮೃತರು ಬಾಡಿಗೆ ಮನೆಯಲ್ಲಿದ್ದರು. ಅವರ ತಾಯಿ ಯುಎಸ್ ನಲ್ಲಿ ಎನ್ ಆರ್ ಐ ಆಗಿದ್ದಾರೆ.