ರಾಯಚೂರು: ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಆರೋಪಿಯ ತೀವ್ರ ವಿಚಾರಣೆ, ಪೊಲೀಸರಿಗೆ ಪ್ರತಿಭಟನೆ ಬಿಸಿ
Published: 26th April 2019 12:00 PM | Last Updated: 26th April 2019 12:22 PM | A+A A-

ಸಂಗ್ರಹ ಚಿತ್ರ
ವಿಶ್ವ ಕರ್ಮ ಸಮುದಾಯದ ಮುಖಂಡ ಮಾರುತಿ ಬಡಿಗೇರ್ ಸೀಮೆ ಎಣ್ಣೆ ಸುರಿದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದರು. ಆದಾಗ್ಯೂ, ಪೊಲೀಸರು ಇದನ್ನು ತಡೆದರು. ಮತ್ತೊಂದೆಡೆ ಕೆಲವು ದುಷ್ಕರ್ಮಿಗಳು ಪೊಲೀಸರತ್ತ ಕಲ್ಲು ಮತ್ತು ನೀರಿನ ಬಾಟಲಿಗಳನ್ನು ತೂರಿದ್ದಾರೆ. ಈ ವೇಳೆ ವಿಶ್ವಕರ್ಮ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಗುರು ತಲೆಗೆ ಗಾಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯ ಪಿಎಸ್ ಐ ಬಿಬಿ ಮರಿಯಂ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಅಂಜನೇಯ ಅವರನ್ನು ರಾಯಚೂರು ಎಸ್ಪಿ ಡಿ ಕಿಶೋರ್ ಬಾಬು ಸೇವೆಯಿಂದ ಅಮಾನತು ಮಾಡಿದ್ದಾರೆ. ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಕಿಶೋರ್ ಹೇಳಿದ್ದಾರೆ.
ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮಧು ಮೃತದೇಹ ಏಪ್ರಿಲ್ 15 ರಂದು ಪತ್ತೆಯಾಗಿತ್ತು. ಏಪ್ರಿಲ್ 16 ರಂದು ಮೃತದೇಹವನ್ನು ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದಾಗ್ಯೂ, ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಮಾದರಿಗಳನ್ನು ಕಲಬುರಗಿಯಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮಧು ಜೊತೆಗೆ ಸಂಬಂಧ ಹೊಂದಿದ್ದಾಗಿ ಆರೋಪಿ ಸುದರ್ಶನ್ ಯಾದವ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದಾಗ್ಯೂ, ಆಕೆಯ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದ್ದಾನೆ ಎಂಬುದು ಪೊಲೀಸ್ ಮೂಲಗಳಿಂದ ಬಂದಿದೆ. ಸಿಐಡಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.