ಶ್ರೀಲಂಕಾ ಸರಣಿ ಸ್ಫೋಟ ಬಳಿಕ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್!
ಶ್ರೀಲಂಕಾದಲ್ಲಿ ಉಗ್ರರು ರಕ್ತಪಾತ ಹರಿಸಿದ್ದು ಇದರಲ್ಲಿ 250ಕ್ಕೂ ಹೆಚ್ಚು ಅಮಾಯಕ ಜನರು ಮೃತಪಟ್ಟಿದ್ದು ಈ ದಾಳಿಯ ಬಳಿಕ ಕರ್ನಾಟಕದ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು: ಶ್ರೀಲಂಕಾದಲ್ಲಿ ಉಗ್ರರು ರಕ್ತಪಾತ ಹರಿಸಿದ್ದು ಇದರಲ್ಲಿ 250ಕ್ಕೂ ಹೆಚ್ಚು ಅಮಾಯಕ ಜನರು ಮೃತಪಟ್ಟಿದ್ದು ಈ ದಾಳಿಯ ಬಳಿಕ ಕರ್ನಾಟಕದ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಸ್ಟರ್ ಸಂಡೇ ಹಬ್ಬದ ಮೂಡ್ ನಲ್ಲಿದ್ದ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಗಳು ಸ್ಫೋಟಿಸಿದ್ದವು. ಇನ್ನು ಶ್ರೀಲಂಕಾಗೆ ಹತ್ತಿರವಾಗಿರುವ ದಕ್ಷಿಣ ಭಾರತದಲ್ಲೂ ಉಗ್ರ ದಾಳಿಯ ಆತಂಕವಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಬೆಂಗಳೂರಿನಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಅದರಂತೆ ನಗರದ ಎಲ್ಲಾ ಸ್ಟಾರ್ ಹೋಟೆಲ್, ಮಾಲ್, ಚರ್ಚ್, ದೇವಸ್ಥಾನ, ಮಸೀದಿಗಳಿಗೆ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದರು.