ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ನಟ ನೀನಾಸಂ ಸತೀಶ್ 

ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕಂಡು ಮಮ್ಮಲ ಮರುಗಿರುವ ನಟ ನೀನಾಸಂ ಸತೀಶ್, ಸಂತ್ರಸ್ತರಿಗೆ  ನೆರವು ನೀಡಿದ್ದಾರೆ.
ನೀನಾಸಂ ಸತೀಶ್
ನೀನಾಸಂ ಸತೀಶ್

ಗದಗ: ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕಂಡು ಮಮ್ಮಲ ಮರುಗಿರುವ ನಟ ನೀನಾಸಂ ಸತೀಶ್, ಸಂತ್ರಸ್ತರಿಗೆ  ನೆರವು ನೀಡಿದ್ದಾರೆ.

ಪ್ರವಾಹದಿಂದ ತತ್ತರಿಸಿರುವ ರೋಣ ತಾಲೂಕಿನ ಹೊಳೆ ಆಲೂರ , ಹೊಳೆ ಮನ್ನೂರ ಗ್ರಾಮಗಳಿಗೆ ಖುದ್ದು ತೆರಳಿ, ಸಂತ್ರಸ್ತರಿಗೆ  ದಿನಬಳಕೆಗೆ ಬೇಕಾದ ಬಟ್ಟೆ, ಬೆಡ್ ಶೀಟ್, ಚಪ್ಪಲಿ, ಟೂತ್ ಪೇಸ್ಟ್ ಮತ್ತಿತರ ಅನೇಕ ಸಾಮಾಗ್ರಿಗಳನ್ನು ವಿತರಿಸಿದ್ದಾರೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ತಮ್ಮ ತಂಡದ ಜೊತೆಗೆ ಆಶ್ರಯ ಮನೆಗಳಿಗೆ ತೆರಳಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಹೋದ ಕಡೆಯಲ್ಲೆಲ್ಲಾ ಆತ್ಮೀಯವಾಗಿ ಸಂತ್ರಸ್ತರನ್ನು ಮಾತನಾಡಿಸಿ, ಯಾರು ಭಯಪಡುವ ಆತಂಕವಿಲ್ಲ, ನಿಮ್ಮ ಜೊತೆ ನಾವು ಇದ್ದೀವಿ ಎಂದು ಹೇಳಿ ಅವರಿಗೆ ಧೈರ್ಯ ತುಂಬಿದ್ದಾರೆ.ಕಷ್ಟಕ್ಕೆ ಸ್ಪಂದಿಸುವ ನೀನಾಸಂ ಸತೀಶ್ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com