ಬೆಂಗಳೂರು: ಟಿಪ್ಪರ್-ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಪ್ರದೇಶ ಮೂಲದ ನಾಲ್ವರು ದಾರುಣ ಸಾವಿಗೀಡಾದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೆಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದವರಾದ ಅಂಜನಿ ಯಾದವ್ (31), ನೇಹಾ ಯಾದವ್ (28) , ಧ್ರುವ ( 02), ಶುಭ್ರಂ ಸಂತೋಷ್ ( 26) ಮೃತರೆಂದು ತಿಳಿದುಬಂದಿದೆ. ಇದಲ್ಲದೆ ಸಂತೋಷ್ ಹಾಗೂ ಸಾನ್ವಿ ಎಂಬುವವರಿಗೆ ಗಂಭೀರ ಗಾಯಗಲಾಗಿದೆ.
ಮೃತರು ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು ಎಲ್ಲರೂ ಒಂದೇ ಕುಟುಂಬದವರೆಂದು ಮಾಹಿತಿ ತಿಳಿಸಿದೆ.
Advertisement