ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಬರ್ ರೈಲಿನ ಇಂಜಿನ್'ನಲ್ಲಿ ಇಂಧನ ಸೋರಿಯಿಂದ ಬೆಂಗಳೂರಿಗೆ ಹೊರಡುವ ರೈಲು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗೆ ರೈಲ್ವೇ ನಿಲ್ದಾಣದಲ್ಲಿಯೇ ನಿಂತಿಕೊಂಡ ಪರಿಮಾಮ, ಡೀಸೆಲ್ ತುಂಬಿಕೊಳ್ಳಲು ಜನರು ಪಾತ್ರೆ, ಬಕೆಟ್ ಗಳನ್ನು ತಂದು ಮುಗಿಬಿದ್ದದ್ದು ಕಂಡು ಬಂದಿತು.
ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516ರೈಲಿನ ಎಂಜಿನ್ ನಲ್ಲಿ ಇಂಧನ ಸೋರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲ್ಲಿಸಲಾಗಿತ್ತು.
ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್ ಹಾಗೂ ಕೊಡಗಳನ್ನು ಹಿಡಿದು ಡೀಸೆಲ್ ತುಂಬಿಸಿಕೊಳ್ಳಲು ಮುಂಗಿ ಬಿದ್ದರು. ಇದರ ಪರಪಿಣಾಮ ಸಂಚಾರ ಕೆಲ ಕಾಲ ಸ್ಥಗಿತಗೊಂಡು, ಪ್ರಯಾಣಿಕರು ಪರದಾಡುವಂತಾಗಿತ್ತು.
Advertisement