ನಾರಾಯಣ ಮೂರ್ತಿ ಪ್ರಪಂಚದ ಅಗ್ರ 15 ವಿಶ್ವವಿದ್ಯಾನಿಲಯಗಳಿಗೆ ಸಮಾನವಾದ ಜಾಗತಿಕ ಹೆಸರಾಂತ ಸಂಸ್ಥೆಯನ್ನಾಗಿ ಇನ್ಸ್ಟಿಟ್ಯೂಟ್ ಅನ್ನು ಅಭಿವೃದ್ದಿಪಡಿಸಲು ಬಯಸುತ್ತಿದ್ದಾರೆ. ಈ ಇನ್ಸ್ಟಿಟ್ಯೂಟ್ ಭಾರತದ ಶೈಕ್ಷಣಿಕ ನಕಾಶೆಯನ್ನೇ ಬದಲಿಸಲಿದೆ.ಈ ಮೂಲಕ ವಿದ್ಯಾರ್ಥಿಗಳಿಗೆ ಅವರ ಜ್ಞಾನದ ಮಾರ್ಗ ತೆರೆದುಕೊಳ್ಳುತ್ತದೆ.ಸರ್ ಸಿವಿ ರಾಮನ್, ಸತ್ಯೇಂದ್ರನಾಥ್ ಬೋಸ್ ಸೇರಿ ಅನೇಕ ಮಹನೀರಂತಹಾ ಶ್ರೇಷ್ಠ ಸಂಶೋಧಕರನ್ನು ರೂಪಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ನಾರಾಯಣಮೂರ್ತಿ ಭಾವಿಸಿದ್ದಾರೆ.