ಬೆಂಗಳೂರು: ಖಡಕ್ ಅಧಿಕಾರಿ ಬಿ.ಪಿ. ನಾಗರಾಜು2 2017ರಲ್ಲಿ ಕುಮಾರಸ್ವಾಮಿ ಟ್ರಾಫಿಕ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ , ಕನಕಪುರ, ಬನಶಂಕರಿ ಮತ್ತು ಸುತ್ತಮುತ್ತಲ ಪ್ರದೇಶದ ನಿವಾಸಿಗಳು ತಮ್ಮ ಸಂಚಾರ ಸಮಸ್ಯೆಗಳಿಂದ ತ್ವರಿತಗತಿಯಲ್ಲಿ ಪಾರಾಗಿದ್ದಾರೆ.ನಾಗರಾಜು ಕೇವಲ ಟ್ರಾಫಿಕ್ ಪೋಲೀಸರ ಕೆಲಸವನ್ನಷ್ತೇ ಮಾಡಿದವರಲ್ಲ, ಅವರು ರಸ್ತೆ ಗುಂಡಿಗಳನ್ನು ಮುಚ್ಚಿ ದೊಡ್ಡ ರಸ್ತೆಗಳ ಸುರಕ್ಷತೆಗೆ ಸಹ ಗಮನ ನೀಡುತ್ತಿದ್ದರು.ಇದಕ್ಕಾಗಿ ಅವರು ಬಿಬಿಎಂಪಿ, ಬಿಎಂಆರ್ ಸಿಎಲ್ ಇಂಜಿನಿಯರ್ ಗಳ ಮೇಲೆ ಒತ್ತಡ ಹೇರಿದ್ದರು.