ಇನ್ನೊರ್ವ ಹೂಡಿಕೆದಾರ ಸೋಹೆಲ್ ಎಂಬುವವರು ಮಾತನಾಡಿ, 'ನಾವು ನಾಲ್ವರು ಭದ್ರಾವತಿಯಿಂದ ಬೆಂಗಳೂರಿಗೆ ದೂರು ನೀಡಲು ಬಂದಿದ್ದೇವೆ. ವೃತ್ತಿಯಲ್ಲಿ ನಾನು ಗ್ರಾಫಿಕ್ ಡಿಸೈನರ್. ನಮ್ಮ ಕುಟುಂಬದ 10ಜನ ಸೇರಿ ಒಟ್ಟು 60 ಲಕ್ಷ ರೂ. ಹೂಡಿಕೆ ಮಾಡಿದ್ದೇವೆ. ಮೊದಲು ನಾನು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. 2017ರಿಂದ ಹಣ ಹೂಡಿಕೆ ಮಾಡಿದ್ದು, ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಮಾರ್ಚ್ ತಿಂಗಳಿನಿಂದ ಹಣ ಕೊಟ್ಟಿಲ್ಲ. ಮನ್ಸೂರ್ ಅವರು ನನಗೆ ಪರಿಚಯವಿಲ್ಲ. ನಮ್ಮ ಸ್ನೇಹಿತರು ಹೂಡಿಕೆ ಮಾಡಿದ್ದರಿಂದ ನಾವು ಕೂಡ ಮದುವೆ ಹಾಗೂ ಸ್ವಲ್ಪ ಹಣ ಉಳಿತಾಯವಾಗಲಿ ಎಂದು ಹೂಡಿಕೆ ಮಾಡಿದ್ದೆವು. ಕೊಟ್ಟ ಹಣದಲ್ಲೀಗ ಅರ್ಧದಷ್ಟಾದರೂ ಬಂದರೆ ಸಾಕು ಎಂದು ಅವರು ಅಳಲು ತೋಡಿಕೊಂಡರು.