ಕುಮಾರ್ ಅವರು ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ವಿಧಾನಸೌಧಕ್ಕೆ ಪ್ಲಾಸ್ಟಿಕ್ ಚೀಲಗಳಲ್ಲಿ ಕೆಲ ದಾಖಲೆಗಳನ್ನು ತಂದಿದ್ದರು. ಕತ್ತು ಕುಯ್ದುಕೊಂಡ ಬಳಿಕ ಕುಸಿದು ಬಿದ್ದ ಜಾಗದಲ್ಲಿ ಕೆಲ ಮಾತ್ರೆಗಳು ಸಹ ಪತ್ತೆಯಾಗಿವೆ ಎನ್ನಲಾಗಿದೆ. ಆದರೆ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂದು ಇನ್ನು ತಿಳಿದು ಬಂದಿಲ್ಲ.