ಜನತಾ ಪರಿವಾರದಿಂದ ಆರ್ ಎಸ್ ಎಸ್ ನ್ನು ಹೊರಹಾಕಲಾಯಿತು, ಇದು ಸಮಾಜವಾದಿಗಳ ಪಿತೂರಿ. ಮನಸ್ಸು ಮಾಡಿದ್ದರೆ ಅಟಲ್ ಬಿಹಾರಿ ವಾಜಪೇಯಿಯವರು ಅಂದು ಪ್ರಧಾನಿಯಾಗಬಹುದಿತ್ತು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದವರು ಜನ ಸಂಘದವರು. ಆದರೂ ವಾಜಪೇಯಿಯವರು ಬೇಸರ ಪಡಲಿಲ್ಲ. ಬದಲಿಗೆ ಬಿಜೆಪಿ ಕಟ್ಟಿ ಬೆಳೆಸಿದರು. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ನೀಡಿರುವಂತೆ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರಿಗೆ ಸೂಕ್ತ ಸೌಲಭ್ಯ ನೀಡುವ ಪ್ರಯತ್ನ ನಡೆಸಿದಾಗ ವ್ಯಾಪಕ ವಿರೋಧ ವ್ಯಕ್ತವಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಮೈಸೂರಿಗೆ ಬಂದಿದ್ದರು, ಆಗ ಆರ್ ಎಸ್ ಎಸ್ ಕಾರ್ಯಕರ್ತರು ಅವರ ಮುಖದ ಮೇಲೆ ಕರಪತ್ರ ಎಸೆದಿದ್ದರು ಎಂದು ಮಧುಸೂದನ್ ಹಳೆಯ ಘಟನಾವಳಿಗಳನ್ನು ಸ್ಮರಿಸಿದರು