ಧಾರವಾಡ ಬಹುಮಹಡಿ ಕಟ್ಟಡ ಕುಸಿತ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರು ಹಾಗೂ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಅವರು ಪೊಲೀಸರಿಗೆ ದೂರ ಸಲ್ಲಿಸಿದ್ದು, ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ರೇಣುಕಾ ಕನ್ಸ್ ಟ್ರಕ್ಷನ್ ಮಾಲೀಕ ವಿವೇಕ ಪವಾರ್, ಕಟ್ಟಡ ಮಾಲೀಕರಾದ ಬಸವರಾಜ್ ನಿಗದಿ, ರವಿ ಸವರದ, ಗಂಗಪ್ಪ ಶಿಂತ್ರಿ, ಮಹಾಬಲೇಶ್ವರ ಕುರಬಗುಡಿ, ರಾಜು ಘಾಟಿನ್ ವಿರುದ್ಧ ಕ್ರಿಮಿನಲ್ ಕೇಸನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.