ಯುವ ದಸರಾ ಉದ್ಘಾಟನೆಗೆ ಗೈರು: ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ ಗಾಯಕಿ ರಾನಿ ಮಂಡಲ್

ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 
ರಾನು ಮಂಡಲ್
ರಾನು ಮಂಡಲ್

ಮೈಸೂರು: ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

ದಸರಾ ಮಹೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಮೈಸೂರಿನಲ್ಲಿ ಯುವ ದಸರಾ ಉದ್ಘಾಟನೆಯಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಪಿ.ವಿ. ಸಿಂಧು ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕಿ ರಾನಿ ಮಂಡಲ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ರಾನು ಮಂಡಲ್ ಗೈರು ಹಾಜರಾಗಿದ್ದರು. 

ಈ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಕ್ಷಮೆ ಕೇಳಿರುವ ಅವರು, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನಮಸ್ತೆ, ಮೈಸೂರು ದಸರಾಗೆ ನೀವು ನನಗೆ ಆಹ್ವಾನ ನೀಡಿದ್ದೀರಿ. ಆದರೆ, ಇಂದು ನನಗೆ ಬರಲು ಆಗಲಿಲ್ಲ. ಏಕೆಂದರೆ ನನಗೆ ಆರೋಗ್ಯ ಸಮಸ್ವಿಯ ಇದೆ. ಹೀಗಾಗಿ ನಾನು ಬರಲು ಆಗುತ್ತಿಲ್ಲ. ನಾನು ಬರದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಬರುತ್ತೇನೆಂದು ಹಿಂದಿಯಲ್ಲಿ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com