ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು

ರೇಂಜ್ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಬೆಂಬಲಿಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು
ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು

ರೇಂಜ್ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಬೆಂಬಲಿಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
 
ಬಿಜೆಪಿಯ ಯುವಮೋರ್ಚಾ ಕಾರ್ಯದರ್ಶಿ ಗಿರಿರಾಜ್ ಗಾಜನೂರು ಗ್ರಾಮದ ನಿವಾಸಿಯಾಗಿದ್ದು ಮತ್ತೋರ್ವ ಸರ್ಕಾರಿ ಅಧಿಕಾರಿಯ ಪರವಾಗಿದ್ದರು. 

ಅ.09 ರಂದು ಸಂಜೆ ನನಗೆ ಕರೆ ಮಾಡಿದ್ದ ಗಿರಿರಾಜ್, ಗಾಜನೂರಿನ ಗಣಪತಿ ದೇವಾಲಯದ ಬಳಿ ಇರುವ ಮಾವಿನ ಮರ ಕತ್ತರರಿಸಿದ್ದಕ್ಕಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರಿಗೆ ನೊಟೀಸ್ ನೀಡಿರುವುದನ್ನು ಪ್ರಶ್ನಿಸಿದ್ದರು. ತಾನು ರಾಘವೇಂದ್ರ ಅವರ ಆಪ್ತನಾಗಿದ್ದು, ಇನ್ನೂ ಹಲವು ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಹೇಳಿದ್ದ ಗಿರಿರಾಜ್ ನೀನು ಗಾಜನೂರಿಗೆ ಪ್ರವೇಶಿಸಿದಲ್ಲಿ ಥಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರ್ ಎಫ್ಒ ಜಯೇಶ್ ಪೊಲೀಸರಿಗೆ ದೂರು ನೀಡಿದ್ದರು. ಆರ್ ಎಫ್ಒ ನ್ನು ಅಮಾನತುಗೊಳಿಸುವುದಾಗಿಯೂ ಬಿಜೆಪಿ ನಾಯಕ ಗಿರಿರಾಜ್ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. 

ವನ್ಯಜೀವಿಗಳಿಗೆ ಸಂಬಂಧ್ಸಿಇದಂತೆ ಸಕ್ರೆಬೈಲು ಆನೆ ಕ್ಯಾಂಪ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಯೂ ಗಿರಿರಾಜ್ ಅರಣ್ಯಾಧಿಕಾರಿ ಜಯೇಶ್ ನ್ನು ನಿಂದಿಸಿದ್ದು, ತಾವು ನೊಟೀಸ್ ಜಾರಿಮಾಡಿರುವುದಕ್ಕೂ ಗ್ರಾಮದ ನಿವಾಸಿಯಾಗಿರುವ ಬಿಜೆಪಿ ನಾಯಕ ಗಿರೀಶ್ ಗೂ ಸಂಬಂಧವೇ ಇಲ್ಲ ಆದರೂ ತಮ್ಮ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಜಯೇಶ್ ಗಿರಿರಾಜ್ ವಿರುದ್ಧ ಆರೋಪ ಮಾಡಿದ್ದರು. ತನಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪಿಂಗ್ ನ್ನು ಆರ್ ಎಫ್ಒ ಪೊಲೀಸರಿಗೆ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com