ಬೆಂಗಳೂರು: ಹಲಸೂರು ಕೆರೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಕ್ಸ್ ಟೌನ್ ನಿವಾಸಿ ರೋಜರ್ ಬಿನ್ನಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, ಗುರುವಾರ ಬೆಳಗ್ಗೆ 11.30 ರ ವೇಳೆಗೆ ರೋಜರ್ ಬಿನ್ನಿ ಕೆರೆಗೆ ಹಾರಿದ್ದಾರೆ. ಕೆರೆಯ ಸೆಕ್ಯೂರಿಟಿ ರೂಪಕಲಾ ಆ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಆತನಿಗಾಗಿ ಶೋಧ ನಡೆಸಿದ್ದಾರೆ.
ವ್ಯಕ್ತಿ ಹಾರಿದ ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್ ರೂಪಕಲಾ ಅವರಿಗೆ ಸೂಸೈಡ್ ನೋಟ್ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ನೀಡಿದ್ದಾರೆ.
ನಾನು ಮತ್ತು ನನ್ನ ಸ್ನೇಹಿತರು ಸೇರಿ ಪ್ರಿಂಟಿಂಗ್ ಶಾಪ್ ತೆಗೆದಿದ್ದೆವು, ಕೆಲ ವರ್ಷಗಳ ಹಿಂದೆ ಅದಕ್ಕಾಗಿ ಲೋನ್ ಪಡೆದುಕೊಂಡಿದ್ದೆವು, ಆದರೆ ಬ್ಯುಸಿನೆಸ್ ಲಾಸ್ ಆಗಿ ಸಾಲ ವಾಪಸ್ ನೀಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Advertisement