ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ ಲಗೇಜ್ ಸೋಂಕು ನಿವಾರಕ ಯಂತ್ರ

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕು ಮುಕ್ತಗೊಳಿಸುವ ಯುವಿ ಬ್ಯಾಗೇಜ್ ಬಾತ್ ಯಂತ್ರವನ್ನು ಅಳವಡಿಸಲಾಗಿದೆ. 
ಲಗೇಜ್ ಸೋಂಕು ನಿವಾರಕ ಯಂತ್ರ
ಲಗೇಜ್ ಸೋಂಕು ನಿವಾರಕ ಯಂತ್ರ
Updated on

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕು ಮುಕ್ತಗೊಳಿಸುವ ಯುವಿ ಬ್ಯಾಗೇಜ್ ಬಾತ್ ಯಂತ್ರವನ್ನು ಅಳವಡಿಸಲಾಗಿದೆ. 

ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ಈ ಯಂತ್ರವನ್ನು ಅಳವಡಿಸಲಾಗಿದೆ. ಬೆಂಗಳೂರು ವಿಭಾಗೀಯ ರೈಲ್ವೇ ಆಡಳಿತ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಕಲ್ಯಾಣಿ ಸೇತುರಾಮನ್ ಹಾಗೂ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಡಾ.ಎ.ಎನ್,ಕೃಷ್ಣ ರೆಟ್ಟಿಯವರು ಸೋಮವಾರ ಈ ಸೋಂಕು ನಿವಾರಕ ಯಂತ್ರಕ್ಕೆ ಚಾಲನೆ ನೀಡಿದರು. 

ಪ್ರಯಾಣಿಕರು ರೈಲು ನಿಲ್ದಾಣ ಪ್ರವೇಶಕ್ಕೂ ಮುನ್ನ ಈ ಸೋಂಕು ನಿವಾರಕ ಸುರಂಗಾಕೃತಿಯ ಯಂತ್ರದಲ್ಲಿ ತಮ್ಮ ಲಗೇಜ್ ಗಳನ್ನು ಹಾಕಬೇಕು. ಈ ವೇಳೆ ಯಂತ್ರದಲ್ಲಿ ಅಲ್ಟ್ರಾ ವಯಲೇಟ್ ಕಿರಣಗಳು ಲಗೇಜ್ ಗಳ ಮೇಲಿನ ವೈರಸ್, ಬ್ಯಾಕ್ಟಿರಿಯಾ ಸೇರಿದಂತೆ ಎಲ್ಲ ರೀತಿಯ ಸೋಂಕುಗಳನ್ನು ನಿವಾರಿಸುತ್ತದೆ. 

ಬಳಿಕ ಸಿಬ್ಬಂದಿ ಸೋಂಕು ಮುಕ್ತ ಎಂಬ ಚೀಟಿಯನ್ನು ಆ ಲಗೇಜ್ ಮೇಲೆ ಅಂಟಿಸಿ, ಪ್ರಯಾಣಿಕರಿಗೆ ಹಿಂದುರಿಸಲಿದ್ದಾರೆ. ಉಚಿತ ಸೇವೆ ನೀಡಲಾಗುತ್ತಿದೆ. ಬಳಿಕ ದರ ನಿಗಪಡಿಸಲು ತೀರ್ಮಾನಿಸಲಾಗಿದೆ. ಚೆನ್ನೈ ಮೂಲಕ ಆಪ್ಟಿಮರ್ ಬಯೋ ಮತ್ತು ಐಟಿ ಸೆಲ್ಯೂಷನ್ ಈ ಯಂತ್ರವನ್ನು ಅಭಿವದ್ಧಿಪಡಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com