ಮಂಗಳೂರು: ವಿದ್ಯುತ್ ತಂತಿ ತುಳಿದು ಬೈಕ್ ಸವಾರ ಸಜೀವ ದಹನ!

ರಾಜ್ಯದಲ್ಲಿ ಮಳೆ ಅವಾಂತರ ಸರಣಿ ಮುಂದುವರೆದಿದ್ದು, ವಿದ್ಯುತ್ ತಂತಿ ತುಳಿದು ಬೈಕ್ ಸವಾರ ಸಜೀವ ದಹನವಾದ ಧಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೈಕ್ ಸವಾರ ಸಾವು
ಬೈಕ್ ಸವಾರ ಸಾವು
Updated on

ಮಂಗಳೂರು: ರಾಜ್ಯದಲ್ಲಿ ಮಳೆ ಅವಾಂತರ ಸರಣಿ ಮುಂದುವರೆದಿದ್ದು, ವಿದ್ಯುತ್ ತಂತಿ ತುಳಿದು ಬೈಕ್ ಸವಾರ ಸಜೀವ ದಹನವಾದ ಧಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಒಂದೆಡೆ ಭೂಕುಸಿತ, ಪ್ರವಾಹದಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದರೆ ಮತ್ತೊಂದೆಡೆ ಮಳೆ ಸಂಬಂಧಿತ ದುರಂತಗಳ ಸರಣಿ ಕೂಡ ಮುಂದುವರೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಡ್ಪಿನಂಗಡಿ ಬಳಿ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ  ನಡೆದಿದೆ.

ಬಲ್ಪ ಗ್ರಾಮದ ನೆಂಟರ ಮನೆಯಿಂದ ಬೆಳ್ಳಂಬೆಳಿಗ್ಗೆ ಬೈಕ್ ನಲ್ಲಿ ಹೊರಟಿದ್ದ ಸುಳ್ಯ ತಾಲೂಕಿನ ಅಜ್ಜಾವರ ನಿವಾಸಿ, ಮುರಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿದ್ದು, ಬೈಕ್ ಸಮೇತ ಸವಾರ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬೈಕ್ ಟ್ಯಾಂಕ್ ನಲ್ಲಿದ್ದ ಪೆಟ್ರೋಲ್ ಲೀಕ್ ಆಗಿದ್ದು, ಬೆಂಕಿಯ  ಕೆನ್ನಾಲಿಗೆ ಇಡೀ ಬೈಕ್ ಗೆ ಆವರಿಸಿದೆ. ಅಲ್ಲದೆ ಮಳೆ ಬಂದಿದ್ದ ಪರಿಣಾಮ ಸವಾರ ಮತ್ತು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೂಲಗಳ ಪ್ರಕಾರ ಈತ ಹಾಲು ಕರೆಯಲು ಅಜ್ಜಾವರ ಭಾಗಕ್ಕೆ ಹೊರಟಿದ್ದ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com