ಮಂಗಳೂರು: 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅನುಭವ್ ಅಪಹರಣವಾದ ಬಾಲಕ.
ಉಜಿರೆ ರಥಬೀದಿ ನಿವಾಸಿ ಬಿಜೋಯ್ ಮತ್ತು ಸರಿಯಾ ಎಂಬುವವರ ಪುತ್ರ ಅನುಭವ್ ಗುರುವಾರ ಸಂಜೆ 6.30 ರ ಸುಮಾರಿಗೆ ಅಪಹರಣವಾಗಿದ್ದಾನೆ.
ಬಾಲಕ ಅನುಭವ್ ಮಾಜಿ ಸೈನಿಕರಾಗಿದ್ದ ತನ್ನ ತಾತ ಶಿವ ಎಂಬುವರೊಂದಿಗೆ ಆಟ ವಾಡುತ್ತಿದ್ದಾಗ ಅಪಹರಣವಾಗಿದ್ದಾನೆ ಎನ್ನಲಾಗಿದೆ.
Advertisement