ಶಿವಮೊಗ್ಗ: ವಿವಾಹಿತೆ ಅನುಮಾನಾಸ್ಪದ ಸಾವು, ಮನೆ ಹೆಂಚು ತೆಗೆದು ಪತಿ, ಅತ್ತೆ, ಮಾವ ಪರಾರಿ!

ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದಿದ್ದು ಪತಿ ಮನೆಯ ಹೆಂಚು ತೆಗೆದು ಪರಾರಿಯಾಗಿದ್ದಾನೆ.
ದೀಪ
ದೀಪ

ಶಿವಮೊಗ್ಗ: ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದಿದ್ದು ಪತಿ ಮನೆಯ ಹೆಂಚು ತೆಗೆದು ಪರಾರಿಯಾಗಿದ್ದಾನೆ.

ಮೃತ ಗೃಹಿಣಿಯನ್ನು 25 ವರ್ಷದ ದೀಪ ಎಂದು ಗುರುತಿಸಲಾಗಿದೆ. ಐದು ವರ್ಷದ ಹಿಂದೆ ದೀಪ ಅವರು ಮೈದೊಳಲು ಗ್ರಾಮದ ಪ್ರದೀಪ್ ಜೊತೆ ವಿವಾಹವಾಗಿತ್ತು.

ದಂಪತಿ ನಡುವೆ ಎಲ್ಲವೂ ಚನ್ನಾಗಿಯೆ ಇತ್ತು. ಆದರೆ ಕಳೆದಂತೆ ದೀಪಾವಳಿಗೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು ಎಂದು ದೀಪ ಕುಟುಂಬಸ್ಥರು ಆರೋಪಿಸಿದ್ದಾರೆ. 

ದೀಪ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪತಿ, ಮಾವ ಮತ್ತು ಅತ್ತೆ ಸೇರಿ ಕೊಲೆ ಮಾಡಿರಬಹುದು ಎಂದು ದೀಪ ಪೋಷಕರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com