ಬೆಂಗಳೂರು: ಎದೆಗೆ ಚಾಕುವಿನಿಂದ ಚುಚ್ಚಿ ವ್ಯಕ್ತಿ ಕೊಲೆ

ವ್ಯಕ್ತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ವ್ಯಕ್ತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ.

ಇರ್ಫಾನ್ ಕೊಲೆಯಾದ ವ್ಯಕ್ತಿ. ‌ಕಾವಲ್​ ಭೈರಸಂದ್ರದ ಇರ್ಫಾನ್​ನ ಹೆಂಡತಿಯನ್ನು ತೌಸೀಫ್​ ಎಂಬಾತ ಎರಡನೇ ಮದುವೆಯಾಗಿದ್ದನು. ತನ್ನ ಹೆಂಡತಿಯನ್ನು ಆಕರ್ಷಿಸಿ ತನ್ನತ್ತ ಸೆಳೆದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಇರ್ಫಾನ್​ ಆಗಾಗ ತೌಸೀಫ್ ಜೊತೆಗೆ ಜಗಳವಾಡುತ್ತಿದ್ದನು.

ಇದೇ ವಿಷಯಕ್ಕೆ ಬುಧವಾರ ಮತ್ತೆ ಜಗಳ ನಡೆದಿದ್ದು, ತನ್ನ ಹೆಂಡತಿಯನ್ನು ಮದುವೆಯಾಗಿರುವ ತೌಸೀಫ್ ಜೊತೆಗೆ ಇರ್ಫಾನ್​ ಹೊಡೆದಾಟ ನಡೆಸಿದ್ದ. ಅದೇ ಕೋಪದಲ್ಲಿ ತೌಸೀಫ್, ಇರ್ಫಾನ್​ನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com