ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ; 'ಕರೋನಾ'ದಿಂದ ತಪ್ಪಿದ ಅನಾಹುತ!

 ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಹಾನಿಯಾಗಿಲ್ಲ. 
ಮೇಲ್ಸೇತುವೆ ಕುಸಿತ
ಮೇಲ್ಸೇತುವೆ ಕುಸಿತ
Updated on

ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಹಾನಿಯಾಗಿಲ್ಲ. 

ಹಾಸನದ ಹೃದಯ ಭಾಗದಲ್ಲಿರುವ ಬಸ್​ ನಿಲ್ದಾಣದಿಂದ ಎನ್​ಆರ್​ ವೃತ್ತದವರೆಗೆ ನಿರ್ಮಾಣವಾಗುತ್ತಿದ್ದ ಮೇಲ್ಸೇತುವೆ ಕುಸಿದು ಬಿದ್ದಿದೆ. ಪ್ರತಿ ನಿತ್ಯ ಇದರ ಕೆಳಗಡೆ ಅಂಗಡಿಗಳು ಮತ್ತು ತಳ್ಳುವ ಗಾಡಿಯಲ್ಲಿ ಹೋಟೆಲ್​ ನಡೆಲಾಗುತ್ತಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಯಾವಾಗಲೂ ಸೇತುವೆಯ ಕೆಳಗಿರುತ್ತಿದ್ದರು, ಆದರೆ ಹೆಚ್ಚಿದ ಕೊರೋನಾ ಭೀತಿಯಿಂದ ಪ್ರಾಣಾಪಾಯ ತಪ್ಪಿದೆ.

ಕೇಂದ್ರ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ 42 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿತ್ತು.  ದಶಕಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು,  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ  ಅಧಿಕಾರಕ್ಕೆ ಬಂದಾಗ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಘಟನೆ ನಡೆದಗಾ ಕಂಟ್ರಾಕ್ಟರ್ ಮತ್ತು ಎಂಜಿನೀಯರ್ ಇರಲಿಲ್ಲ.

ಈ ಮೇಲ್ಸೇತುವೆ ಕೆಳಗೆ ಪ್ರತಿನಿತ್ಯ ಹತ್ತಾರು ಬೀದಿ ಬದಿ ಕ್ಯಾಂಟೀನ್​ಗಳು ತೆರೆದಿರುತ್ತಿದ್ದವು. ವಾಹನ ಸಂಚಾರರು ಸೇರಿದಂತೆ ಅನೇಕರು ಇಲ್ಲಿ ಕೆಲವರು ತಿಂಡಿ ತಿನ್ನುತ್ತಿದ್ದರು. ಆದರೆ, ವಿಶ್ವದೆಲ್ಲೆಡೆ ಮೂಡಿರುವರುವ ಕೊರೋನಾ ಭೀತಿ ಹಿನ್ನೆಲೆ ನಿನ್ನೆಯಿಂದ ರಸ್ತೆ ಬದಿ ಕ್ಯಾಂಟೀನ್ ತೆರೆಯದಂತೆ ಜಿಲ್ಲಾಡಳಿತ ಸೂಚಿಸಿತ್ತು. ಇದೇ ಹಿನ್ನೆಲೆ ಇಂದು ಫ್ಲೈ ಓವರ್​ ಕೆಳಗೆ ಎಂದಿನ ಜನಸಂದಣಿ ಇರಲಿಲ್ಲ. ಈ ಹಿನ್ನೆಲೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com