ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈನಿಂದ ಆಗಮಿಸಿ ಮೆಜೆಸ್ಟಿಕ್ ನಲ್ಲಿ ಸುತ್ತಾಟ; ಕೈಲಿದ್ದ ಸೀಲ್ ನೋಡಿ ಆಸ್ಪತ್ರೆಗೆ ಸೇರಿಸಿದ ಪೊಲೀಸರು

ದುಬೈನಿಂದ ಆಗಮಿಸಿದ್ದ ಕೊರೋನಾ ಸೋಂಕು ಶಂಕಿತ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರೂಂ ಸಿಗದೆ ದುಬೈನಿಂದ ಪರದಾಡಿ, ಮೆಜೆಸ್ಟಿಕ್ ಪ್ರದೇಶೇದಲ್ಲಿ ಓಡಾಡಿರುವ ಘಟನೆ ನಡೆದಿದೆ.
Published on

ಬೆಂಗಳೂರು: ದುಬೈನಿಂದ ಆಗಮಿಸಿದ್ದ ಕೊರೋನಾ ಸೋಂಕು ಶಂಕಿತ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರೂಂ ಸಿಗದೆ ದುಬೈನಿಂದ ಪರದಾಡಿ, ಮೆಜೆಸ್ಟಿಕ್ ಪ್ರದೇಶೇದಲ್ಲಿ ಓಡಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಏರ್​ಪೋರ್ಟ್​ ಸಿಬ್ಬಂದಿಯ ಬಳಿ ತಾನು ಚೆನ್ನೈನವನು, ದುಬೈನಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ಕೈಗೆ ಸ್ಟಾಂಪ್ ಹಾಕಿದ್ದರೂ ನಗರದಾದ್ಯಂತ ಸುತ್ತಾಡುತ್ತಿದ್ದ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ ಬೆಂಗಳೂರಿನ ಏರ್​ಪೋರ್ಟ್​ ಸಿಬ್ಬಂದಿಯ ಬಳಿ ತಾನು ಚೆನ್ನೈನವನು ಎಂದು ಹೇಳಿಕೊಂಡ ವ್ಯಕ್ತಿ, ದುಬೈನಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಆತನ ಕೈಗೆ ಸ್ಟಾಂಪ್ ಹಾಕಿದ್ದರೂ ಮನೆಗೆ ತೆರಳದೇ ಮೆಜೆಸ್ಟಿಕ್ ಪ್ರದೇಶದಲ್ಲಿ ಲಾಡ್ಜ್ ನಲ್ಲಿ ರೂಂ ಮಾಡಿ ಹೊರಗೆ ಒಡಾಡುತ್ತಿದ್ದರು. 

ವ್ಯಕ್ತಿಯ ಕೈಗೆ ಹಾಕಲಾಗಿದ್ದ ಸ್ಟಾಂಪ್ ಅನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಈ ವೇಳೆ ಸ್ಥಳಕ್ಕಾಗಿಮಿಸಿದ ಉಪ್ಪಾರಪೇಟೆ ಪೊಲೀಸರು ಕೈಗೆ ಸೀಲ್ ಹಾಕಿದ್ದರೂ ಹೊರಗೆ ಓಡಾಡುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ 'ಕೊರೋನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ಲಾಡ್ಜ್​ನಲ್ಲಿ ರೂಂ ಸಿಗಲಿಲ್ಲ, ಅದಕ್ಕಾಗಿ ಓಡಾಡುತ್ತಿದ್ದೇನೆ ಎಂದು ಹೇಳಿರುವ ಆ ವ್ಯಕ್ತಿಯನ್ನು ಆ್ಯಂಬುಲೆನ್ಸ್​ನಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಈಗಾಗಲೇ ಬೇರೆ ದೇಶಗಳಿಂದ ಏರ್​ಪೋರ್ಟ್​ಗೆ ಬರುವ ಪ್ರಯಾಣಿಕರಿಗೆ 14 ದಿನಗಳ ಕಾಲ ಮನೆಯಿಂದ ಆಚೆ ಬಾರದಿರಲು ಸೂಚಿಸಲಾಗಿದೆ. ಒಂದುವೇಳೆ ಅವರು ಮನೆಯಿಂದ ಆಚೆ ಬಂದರೆ ಸಾರ್ವಜನಿಕರಿಗೆ ತಿಳಿಯಲಿ ಎಂದು ಅವರ ಕೈ ಮೇಲೆ ಸ್ಟಾಂಪಿಂಗ್ ಹಾಕಲಾಗುತ್ತಿದೆ. ಆ ಸೀಲ್ ಇರುವುದರಿಂದ ಅವರ ಐಸೋಲೇಷನ್ ಅವಧಿ ಯಾವಾಗ ಮುಗಿಯುತ್ತದೆ ಎಂಬುದು ಸುಲಭವಾಗಿ ತಿಳಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com